ಪ್ರಜಾವಾಣಿಯಲ್ಲಿ ಇಂದು (೨೭.೧.೨೦೧೦) ಬಂದ ಈ ಶೀರ್ಷಿಕೆ ನೋಡಿದರೆ ಈದ್ಗಾ ಮೈದಾನದ ವಿವಾದ ಈಗ್ಲೂ ಇದೆಯೆ ಅನ್ನೋ ಅರ್ಥ ಬರುತ್ತೆ. Read the rest of this entry »

ನಮ್ಮ ಮಾನಸಿಕತೆಯೇ ಇಷ್ಟು: ವಿಜಯ ಕರ್ನಾಟಕಕ್ಕಿಂತ ವಿಮರ್ಶಕಿಯಿಂದಲೇ ಈ ಬ್ಲಾಗಿಗೆ ಹೆಚ್ಚು ಪ್ರಚಾರ ಸಿಗ್ತು ಅಂತ. ಹೌದ? ನೋಡಿ: ವಿಮರ್ಶಕಿಯ ಬ್ಲಾಗಿನಲ್ಲಿ ಈ ವಿಷಯವನ್ನು ಓದಿದವರು (as on 27.1.2010 midnight) ೪೫೭ ಜನ (ಇವರಲ್ಲಿ ಹೆಚ್ಚಿನವರು ಪತ್ರಕರ್ತರೇ ಅನ್ನೋದ್ರಲ್ಲಿ ನನಗಂತೂ ಅನುಮಾನವಿಲ್ಲ)  ಆದರೆ ವಿಜಯ ಕರ್ನಾಟಕದ ಓದುಗರ ಸಂಖ್ಯೆ ಬೆಂಗಳೂರಿನಲ್ಲೇ ಕನಿಷ್ಠ ಐದು ಲಕ್ಷ. ರಾಜ್ಯದ ಲೆಕ್ಕಾಚಾರ ತಗೊಂಡ್ರೆ ಎಷ್ಟಾಗುತ್ತೆ? ನೀವೇ ಲೆಕ್ಕ ಮಾಡಿ. ಹಾಗಾದರೆ ಯಾವ ಪ್ರಕಟಣೆಯಿಂದ ಈ ವಿಷಯ ಹೆಚ್ಚು ಪ್ರಚಾರ ಆಯ್ತು? ಸಾಮಾನ್ಯ ಗಣಿತವಾದ್ರೂ ಗೊತ್ತಿರಬೇಕಲ್ವರ? ಈಗ್ಲಾದ್ರೂ ಹೇಳಿ ಹೆಚ್ಚಿನ ಅನರ್ಥ ಯಾರಿಂದ ಆಗಿದ್ದು ಅಂತ?

ವಿಜಯ ಕರ್ನಾಟಕದ ಓದುಗರಿಗೆ ಒಂದು ಭೀಕರ ಸಂತಸದ ಸುದ್ದಿ: ಈಗ ವಿಜಯಕರ್ನಾಟಕವು ರತಿಕ್ರೀಡಾವರದಿಯ ಮುಂಚೂಣಿ ಪತ್ರಿಕೆ! Read the rest of this entry »

ಇಂಥ ಲೇಖನವನ್ನು (Prajavani, 13 Jan 2010) ಹಿರಿಯ ವಿಜ್ಞಾನ ಲೇಖಕಿ ಬಿ ಎಸ್ ಶೈಲಜಾರಿಂದ ನಿರೀಕ್ಷಿಸಿರಲಿಲ್ಲ. ಅವರ ಲೇಖನವನ್ನು ಭೂತಗನ್ನಡಿಯಲ್ಲಿ ಹಾಕಿ ನೋಡುವುದಕ್ಕೇ ಭಯ. ಆದ್ರೂ ಈ ಲೇಖನದಲ್ಲಿ ಕೆಲವು ದೊಡ್ಡ – ಪುಟ್ಟ ತಪ್ಪುಗಳು ನುಸುಳಿವೆ ಅಂತ ತಿಳಿಸೋದಕ್ಕೆ ವಿಮರ್ಶಕಿ ಧೈರ್ಯ ಮಾಡ್ತಿದಾಳೆ: Read the rest of this entry »

ಟೆಲಿ ಸ್ಕೌಟರ್ ಬಗ್ಗೆ ಇಂದು ಲವಲವಿಕೆಯಲ್ಲಿ (೧೩.೧.೨೦೧೦) ಬಂದ  ಲೇಖನವನ್ನು ರಿ-ಇಂಜಿನಿಯರಿಂಗ್ ಮಾಡಿ ನೋಡಿದ್ರೆ, ಸರಿಯಾಗಿರೋ ಸುದ್ದಿಯಲ್ಲೂ ಓದುಗರನ್ನು ಮಂಗ ಮಾಡೋ ಕೆಟ್ಟ ಮಾನಸಿಕತೆಯನ್ನು ಕಾಣಬಹುದು: Read the rest of this entry »

೨೦೧೨ರ ಪ್ರಳಯದ ಭೀತಿಯಲ್ಲಿ ಜನ ಇರೋವಾಗ, ಇನ್ನು ಇಪ್ಪತ್ತೇ ವರ್ಷಗಳಲ್ಲಿ ನಕ್ಷತ್ರವೊಂದು  ಸ್ಫೋಟಿಸಿದ ಹೊಡೆತಕ್ಕೆ ಭೂಮಿ ಒರೆಸಿಹೋಗಲಿದೆ ಎಂಬರ್ಥ ಬರುವಂಥ ಸುದ್ದಿಯನ್ನು ಪ್ರಜಾವಾಣಿ ಇಂದು (೮.೧.೨೦೧೦) ಪ್ರಕಟಿಸಿದೆ. ಈ ಸುದ್ದಿಯನ್ನು ಓದಿದಾಗಲೇ ಈ ಬಗ್ಗೆ ಕೊಂಚ ವಾರೆಗಣ್ಣು ಹಾಕಬೇಕು ಅಂತಿದ್ದೆ; ಅಷ್ಟು ಹೊತ್ತಿಗೆ ನನ್ನ ಅಭಿಮಾನಿ ಓದುಗ ರವಿಪ್ರಕಾಶ್ ಬಿಕೆ ಅನ್ನೋವ್ರು ಈ ಸುದ್ದಿ ಅಸ್ಪಷ್ಟವಾಗಿದೆ ಅಂತ ಕಾಮೆಂಟ್ ಕಳಿಸಿದ್ದಾರೆ. ವಿಜ್ಞಾನದ ಸುದ್ದಿಯಾಗಿ ನೋಡಿದರೆ ಅಂಥ ತಪ್ಪುಗಳೇನಿಲ್ಲ. ಆದರೆ ಓದುಗರಿಗೆ ಗಾಬರಿ ಹುಟ್ಟಿಸಲು ಒಂದೇ ತಪ್ಪು ಸಾಕಲ್ಲ….!

Read the rest of this entry »

ತದಡಿಯಲ್ಲಿ ಡೀಸೆಲ್ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಅರುಣ್ ಬರ‍್ದವ್ರೆ.. Read the rest of this entry »

ಕರಿಯರನ್ನು ಹೀಗಳೆದು ಬರೆದರೆ ವರ್ಣಭೇದ ಆಗುತ್ತೆ; ಆದರೆ ಬಿಳಿಯರನ್ನು ಈ ೨೦೧೦ನೇ ಇಸವಿಯಲ್ಲಿ ಹೀಗಳೆದರೆ? ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇಂದು (೪.೧.೨೦೧೦) ಬಂದ ಈ ಕ್ರೀಡಾ ವರದಿ ನೋಡಿದರೆ ವಿಮರ್ಶಕಿಗೆ ಹೀಗನ್ಸಿದ್ದಂತೂ ಹೌದ್ರೀಯಪ… Read the rest of this entry »

ಈಗ ಪ್ರಜಾವಾಣಿಯಲ್ಲೂ ‘ಸುದ್ದಿಗಾಗಿ ಕಾಸು’ ದಿನೇಶ್ ಆಮಿನ್‌ಮಟ್ಟು ಅವರ ಹರಿತ ಲೇಖನಿಯಿಂದ ಮೂಡಿಬಂದಿದೆ. ಪ್ರಜಾವಾಣಿಯು ಮಉಂದಿನ ಚುನಾವಣೆಗಳಲ್ಲಿ ಈ ನಿಲುವಿಗೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸೋಣ. ಇಂಥ ಮೌಲ್ಯಯುತ ಲೇಖನ ನೀಡಿದ ಪ್ರಜಾವಾಣಿಗೆ ಅಭಿನಂದನೆಗಳು. Read the rest of this entry »

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಲೈಂಗಿಕ ಶೋಷಣೆಯ ವರದಿಗಳೇ ಕಂಡುಬರುತ್ತಿವೆ. ಟೈಗರ್ ವುಡ್‌ನಿಂದ ಹಿಡಿದು ರಾಜ್ಯಪಾಲರವರೆಗೆ, ರಾಠೋಡ್‌ನಿಂದ ಹಿಡಿದು  ಐ ಪಿ ಎಸ್ ಅಧಿಕಾರಿ ಮಧು ಟಂಡನ್‌ವರೆಗೆ, ಲೈಂಗಿಕ ಶೋಷಣೆಗೆ ಒಳಗಾದವರ ಸುದ್ದಿಯೇ ಸುದ್ದಿ. ಅದರಲ್ಲೂ ರಾಠೋಡ್ ಪ್ರಕರಣವಂತೂ ಪ್ರತಿದಿನವೂ ಹೆಚ್ಚೆಚ್ಚು ಕಾಲಂಗಳನ್ನು ಕಬಳಿಸುತ್ತ ಬೆಳೆಯುತ್ತಿದೆ. Read the rest of this entry »

ಇಂದು ಪತ್ರಿಕಾ ಕಚೇರಿಗಳಲ್ಲಿ ಇಂಡಿಯನ್ ರೀಡರ್‌ಶಿಪ್ ಸಮೀಕ್ಷೆಯದೇ (ಐ ಆರ್ ಎಸ್) ಸುದ್ದಿ. ಈ ಬಗ್ಗೆ ಓದುಗರಿಗೆ ಸರಿಯಾಗಿ ಮಾಹಿತಿ ಸಿಗುವುದೇ ಕಷ್ಟ. ಅಂಕಿ ಅಂಶಗಳನ್ನು ಹೇಗೆ ಬೇಕಾದರೂ ನಿರೂಪಿಸಿ ನಮ್ಮ ಪತ್ರಿಕೆಯ ಮೀಸೆ ಮಣ್ಣಾಗಿಲ್ಲ ಎಂದು ಹೇಳುವುದೇ ಹೆಚ್ಚು. ಇದು ತಪ್ಪೇನಲ್ಲ. ಆದರೆ ಕೆಲವೊಮ್ಮೆ ಎಲ್ಲಾ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪ್ರಕಟವಾಗಬೇಕು. ಇಂಥ ಒಂದು ಸುದ್ದಿ ಈಗ ಬಂದಿದೆ. Read the rest of this entry »

ಎಡಿಟರ್ಸ್ ಗಿಲ್ಡ್ ಅಧ್ಯಕ್ಷ ರಾಜದೀಪ್ ಸರ್ದೇಸಾಯಿ ಇಂದು (೧.೧.೨೦೧೦) ಪ್ರಜಾವಾಣಿಯಲ್ಲಿ ಬರೆದ ಈ ಲೇಖನವು ಪತ್ರಕರ್ತರಿಗೆ ಹೊಸ ವರ್ಷದ ಸಂದೇಶದಂತಿದೆ! Read the rest of this entry »

ಒಳ್ಳೆಯ, ಮಾನವೀಯ ಸುದ್ದಿಯೊಂದನ್ನು ಉದಯವಾಣಿಯ ಕೋಲಾರ ಆವೃತ್ತಿಯ ಪುಟದಲ್ಲಿ (೨೯.೧೨.೨೦೦೯) ನೀವು ಓದಬಹುದು. ಇಂಥ ಸುದ್ದಿಗಳು ತೀರಾ ಸರಳವಾಗಿ ಓದಿಕೊಂಡು ಹೋದರೂ, ಈ ಬಗ್ಗೆ ಮುಂದೆ ಒಂದು ಫೀಚರ್ ಲೇಖನವನ್ನೇ ಮಾಡಬಹುದು. ಸರಿಯಾದ ಬಾಲಿವುಡ್ ಕಥೆಗಾರ ಸಿಕ್ಕರೆ ‘ಪಾ’ ದಂಥ ಸಿನೆಮಾವನ್ನೂ ಮಾಡಬಹುದು. Read the rest of this entry »

ಮಾಧ್ಯಮಗಳ ಮೇಲೆ ಕಾರ್ಪೋರೇಟ್ ಮುಖ್ಯಸ್ಥರು ಲೇಖನ ಬರೆಯುವುದೇ ದೊಡ್ಡ ವಿಚಾರ. ಅದರಲ್ಲೂ ಐ ಐ ಪಿ ಎಂ ಎಂಬ ಸಂಸ್ಥೆಯ ಮುಖ್ಯಸ್ಥ ಅರಿಂದಮ್ ಚೌಧರಿಯವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಹಾಡಿ ಹೊಗಳಿ ಬರೆಯುವುದೆಂದರೆ? ಇಂಥ `ಅಧ್ಯಯನಪೂರ್ಣ’ ಲೇಖನವನ್ನು ಮೀಡಿಯಾ ಮಿರ್ಚಿಯು ಪ್ರಕಟಿಸಿದೆ. ಹಾಗಾದರೆ ಟೈಮ್ಸ್ ಆಫ್ ಇಂಡಿಯಾಗೂ, ಅರಿಂದಮ್ ಚೌಧರೀಗೂ, ಮೀಡಿಯಾ ಮಿರ್ಚಿಗೂ ಇರುವ ಸಮಾನ ಭಾವಗಳೇನು? Read the rest of this entry »

ನಿನ್ನೆ ಸುರಿದ ಅಕಾಲಿಕ ಮಳೆಯ ಕೆಟ್ಟ ಸುದ್ದಿಯನ್ನು ಅತ್ಯಂತ ವಿವರವಾಗಿ (೨೮.೧೨.೨೦೦೯) ಬೆಂಗಳೂರು ಆವೃತ್ತಿಯಿಂದ ಹಿಡಿದು ಎಲ್ಲ ಆವೃತ್ತಿಗಳಲ್ಲೂ ಪ್ರಮುಖವಾಗಿ ಪ್ರಕಟಿಸಿದ ಪ್ರಜಾವಾಣಿಯ ಕೆಲಸ ಶ್ಲಾಘನೀಯ.

Read the rest of this entry »

“ಟ್ರಾನ್ಸ್‌ಫಾರ್ಮಿಂಗ್ ಟೆಲಿವಿಜನ್ ಸಾಮರ್ಥ್ಯ” ಅಂದ್ರೇನು? ಇಂಥಾ ಸುದ್ದಿಯೊಂದು ಇಂದಿನ (೨೮.೧೨.೨೦೦೯) ಲವಲವಿಕೆಯಲ್ಲಿ ಪ್ರಕಟವಾಗಿದೆ. Read the rest of this entry »

ಒಂದು ಹೆಣ್ಣಿನ ಬಗ್ಗೆ ಎಷ್ಟೆಲ್ಲ ಹೊಲಸು ಬರೆಯಲು ವಿಜಯ ಕರ್ನಾಟಕವೂ ಮುಂದಾಗಬಹುದು ಎನ್ನುವುದಕ್ಕೆ (28.12.2009) ಇದೊಂದು ಉದಾಹರಣೆ. Read the rest of this entry »

ಸುನಾಮಿ ನೆನಪಿನಲ್ಲಿ ಇವತ್ತಿನ (27.12.2009) ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಚಿತ್ರ ಸುನಾಮಿಯದಲ್ಲ; ಹರಿಕೇನ್ ಕಣ್ಣಿನದು. Read the rest of this entry »

‘ಪಾವತಿಸಿ ಪಡೆದ ಸುದ್ದಿ’ಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಅದರ ಒಂದು ಸಂಕ್ಷಿಪ್ತ ಪಠ್ಯವನ್ನು ಇಲ್ಲಿ ವಿವಿಧ ಮಾಧ್ಯಮಗಳನ್ನು ಓದಿ ನೀಡಲಾಗಿದೆ. ನಿಮಗಾಗಿ! Read the rest of this entry »

ಆಹಾ…. ವಿಜಯ ಕರ್ನಾಟಕದ ಬಗ್ಗೆಯೇ ಯಾಕೆ ಮತ್ತೆ ಮತ್ತೆ ಬರೆದು ಪಕ್ಷಪಾತಿತನ ತೋರುಸ್ತೀಯ ಬುಡು ಅಂತ ನನ್ನ ಓದುಗ ಅಣ್ಣಾವ್ರು, ಅಕ್ಕಾವ್ರು ಕೇಳ್ತಾ ಇದಾರೆ. ನಾನೂ ಹಂಗೇಯ  ತಲೆ ಕೆರ‍್ಕಂಡೂ ಕೆರ‍್ಕಂಡೂ…. ಆರೆ…… ನೋಡಿದ್ರ… ಇವತ್ತಿನ (23.12.2009) ಲವಲವಿಕೆಯಲ್ಲಿ ಬಂದ ‘ಬೊಕ್ಕತಲೆಗೊಂದು ಕ್ಯಾಲ್ಕುಲೇಟರ್’ ಸುದ್ದೀನ? ಸದ್ಯ, ಈ ಸುದ್ದಿ ಸಿಗ್ದೇ ಹೋಗಿದ್ರೆ ಹಂಗೇಯ ನನ್ ತಲೆ ಬೊಕ್ಕತಲೆ ಆಗಿಹೋಗ್ತಿತ್ತು… Read the rest of this entry »