ಗಿಟಾರ್ ಗೊತ್ತಿಲ್ಲ, ಸೆಲ್ಲೋ ನೋಡಿಲ್ಲ… ಅಂದಮೇಲೆ ಹೀಂಗಾಗೂದೇ…
ಕನ್ನಡಪ್ರಭದ ಸಂಪಾದಕೀಯ ವಿಭಾಗದಲ್ಲಿ ಗಿಟಾರ್ ವಾದ್ಯವನ್ನೇ ನೋಡಿದವರು ಇಲ್ಲ ಅನ್ಸುತ್ತೆ. ಇಲ್ಲಾಂದ್ರೆ ಈ ಛಾಯಾಚಿತ್ರದಲ್ಲಿ (೨೧ ಡಿಸೆಂಬರ್ ೨೦೦೯, ಪುಟ ೯) ರಾಮನ್ ಬಾರಿಸ್ತಾ ಇರೋದು ಗಿಟಾರ್ ಅಂತ ಬರೀತಾ ಇರ್ಲಿಲ್ಲ.
ಕನ್ನಡಪ್ರಭದ ಸಂಪಾದಕೀಯ ವಿಭಾಗದಲ್ಲಿ ಗಿಟಾರ್ ವಾದ್ಯವನ್ನೇ ನೋಡಿದವರು ಇಲ್ಲ ಅನ್ಸುತ್ತೆ. ಇಲ್ಲಾಂದ್ರೆ ಈ ಛಾಯಾಚಿತ್ರದಲ್ಲಿ (೨೧ ಡಿಸೆಂಬರ್ ೨೦೦೯, ಪುಟ ೯) ರಾಮನ್ ಬಾರಿಸ್ತಾ ಇರೋದು ಗಿಟಾರ್ ಅಂತ ಬರೀತಾ ಇರ್ಲಿಲ್ಲ.
ಒಂದು ಪತ್ರಿಕೆಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುದ್ದಿಯನ್ನು ಇನ್ನೊಂದು ಪತ್ರಿಕೆಯಲ್ಲಿ ವರದಿ ಮಾಡುವುದಿಲ್ಲ, ಚಿತ್ರ ಹಾಕುವುದಿಲ್ಲ ಎಂಬ ಬಗ್ಗೆ ವಿಶ್ವೇಶ್ವರ ಭಟ್ಟರು ಬರೆದ ಒಂದೇ ಕಾಮೆಂಟಿಗೆ ಹಲವು ಪ್ರತಿಕ್ರಿಯೆಗಳು ಬಂದಿವೆಯೆಂದು ಭಟ್ಟರು ಇಂದಿನ (೧೯ ಡಿಸೆಂಬರ್ ೨೦೦೯) ಪತ್ರಿಕೆಯಲ್ಲಿ ಬರೆದಿದ್ದಾರೆ.
’ಕಂಪ್ಯೂಟರ್ಗಳಿಗೆ ಸನ್ನಿಹಿತ ಅವಸಾನ ಎಂಬ’ ಇವತ್ತಿನ (೨೦೦೯ ಡಿಸೆಂಬರ್ ೧೮) ವಿಜಯ ಕರ್ನಾಟಕದ ಲವಲವಿಕೆಯ ಈ ಲೇಖನವನ್ನು ಓದಿ. ’ವರ್ಚುಯಲ್ ಕಂಪ್ಯೂಟಿಂಗ್’ ’ವರ್ಚುಯಲ್ ಡೆಸ್ಕ್ಟಾಪ್’, – ಈ ಎಲ್ಲ ಪದಗಳನ್ನು ಮನಸ್ಸಿಗೆ ಬಂದಂತೆ ಬಳಸಿ ಇಡೀ ಲೇಖನವೇ ಯಾರಿಗೂ ಅರ್ಥವಾಗದಂತೆ ಮಾಡಿಬಿಟಿದ್ದಾರೆ. (More …)
ಇವತ್ತು (೧೮ ಡಿಸೆಂಬರ್ ೨೦೦೯) ಹೊಸದಿಗಂತದ ಈ ಪುಟ ಹೀಗೆ ಉಲ್ಟಾ ಪಲ್ಟಾ ಆಗಿತ್ತು. (More …)
ಕನ್ನಡದ ಹಿರಿಯ ಗಾಯಕ ’ಸಿ ಅಶ್ವಥ್ ಅಸ್ವಸ್ಥ’ ಎಂಬ ಸುದ್ದಿಯನ್ನು ನೀವು ಎಲ್ಲ ಪತ್ರಿಕೆಗಳಲ್ಲಿ ಓದಿರುತ್ತೀರಿ. ಈ ಸುದ್ದಿಯಲ್ಲಿ ಒಂದು ಕ್ರೌರ್ಯ ಅಡಗಿದೆ ಎಂದು ವಿಮರ್ಶಕಿಗೆ ಅನ್ನಿಸಿದೆ. (More …)
ನನ್ನ ತಕರಾರು ಬೇರೆ ಬಗೆಯದು. ಈ ಎಲ್ಲ ವರದಿಗಳಲ್ಲಿ (except your title line) ‘ಅಶ್ವತ್ಥ್” ಎಂದು ಬರೆಯಲಾಗಿದೆ. ಇದು ತಪ್ಪು ಸ್ಪೆಲಿಂಗ್. ‘ಅಶ್ವತ್ಥ’ ಎಂದು ಬರೆಯುವದು ಸರಿಯಾದದ್ದು. ಒತ್ತಕ್ಷರವಿದ್ದಾಗ ವ್ಯಂಜನಾಂತ ಮಾಡಿ ಉಚ್ಚರಿಸಲು ಸಾಧ್ಯವೆ?
ಈ ವಾರದ ಔಟ್ಲುಕ್ ಮ್ಯಾಗಜಿನ್ನಲ್ಲಿ ಪತ್ರಿಕೋದ್ಯಮವು ಹೇಗೆ ಮಾರಾಟದ ಸರಕಾಗಿದೆ ಎಂಬ ಲೇಖನಗಳಿವೆ. ಔಟ್ಲುಕ್ ಪತ್ರಿಕೆಯನ್ನು ಕೊಂಡು ಓದಿ. ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡಿ ಅಂತರಜಾಲ ಆವೃತ್ತಿಯಲ್ಲಿ ಓದಿ. (More …)
Shocking!
read The Hindu edit & articles…on same subject..
Journalism for sale
http://beta.thehindu.com/opinion/editorial/article41149.ece
beta.thehindu.com/opinion/letters/article45416.ece
ಕೈಗಾ ಪರಮಾಣು ಸ್ಥಾವರದಲ್ಲಿ ನಡೆದ ದುಷ್ಕೃತ್ಯದ ಬಗ್ಗೆ ಎಲ್ಲ ಪತ್ರಿಕೆಗಳೂ ವರದಿ ಮಾಡಿವೆಯೇನೋ ನಿಜ. ಆದರೆ ವಿಜ್ಞಾನದ ವರದಿ ಮಾಡುವಾಗ ವಹಿಸಬೇಕಾಗಿದ್ದ ಎಚ್ಚರಿಕೆಯನ್ನು ಹಲವು ಪತ್ರಿಕೆಗಳು ವಹಿಸಿಲ್ಲ! ವಿಜ್ಞಾನ ವರದಿಗಾರಿಕೆಯಲ್ಲಿನ ಗಂಭೀರ ಕೊರತೆಯನ್ನು ಈ ಸುದ್ದಿ ಬಯಲು ಮಾಡಿದೆ.
Wikipedia mattu Kanaja bagge ondu observation illide nodi – http://platonic.techfiz.info/2009/12/10/kannada-wikipaedia/
Vimarshaki writes: This is a very good observation. It sheds light on the foolishness on the part of Deccan Herald, as well on the shoddy way of doing things by Karnataka Knowledge commission.
ಉತ್ತಮ ಲೇಖನ. ಮಾಧ್ಯಮದಲ್ಲಿ ಕೆಲಸ ಮಾಡುವವರು ಕನಿಷ್ಠ ಮಟ್ಟದ ವಿಜ್ಞಾನ ತಿಳಿವಳಿಕೆ ಮಾಡಿಕೊಳತಕ್ಕದ್ದು. ಒಂದು ವಿಷಯದ ಬಗ್ಗೆ ಲೇಖನ ಬರೆಯುವಾಗ ಅದರ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಈಗ ಅಂತರಜಾಲದ ಸಹಾಯವಿರುವುದರಿಂದ ಎಲ್ಲ ಮಾಹಿತಿಗಳು ಕ್ಷಣದಲ್ಲೇ ಲಭ್ಯ. ಆದರೆ ದುರದೃಷ್ಕಕ್ಕೆ ನಮ್ಮ ಬಹುಮಂದಿ ಪತ್ರಿಕೋದ್ಯೋಗಿಗಳಿಗೆ ಜ್ಞಾನಹಂಬಲವಿಲ್ಲ. ಎಲ್ಲ ಪತ್ರಿಕೋದ್ಯೋಗಿಗಳೂ ಹಾಗಿಲ್ಲ. ವಿಷಯ ತಿಳಿದು, ಅಥವಾ ತಿಳಿದವರನ್ನು ವಿಚಾರಿಸಿ ಲೇಖನ ಮಾಡುವವರೂ ಇದ್ದಾರೆ.
ಅಂದ ಹಾಗೆ ಟ್ರಿಷಿಯಂ ಕೂಡ ಸರಿ. ಮಾರಿಯಮ್ ವೆಬ್ಸ್ಟರ್ ಜಾಲತಾಣದಲ್ಲಿ ಟ್ರಿಟಿಯಂ ಮತ್ತು ಟ್ರಿಷಿಯಂ ಎಂಬ ಎರಡು ಉಚ್ಚಾರಣೆಗಳೂ ಇವೆ. ನಾನು ಭಾಭಾ ಪರಮಾಣು ಸಂಶೋಧನ ಕೇಂದ್ರದಲ್ಲಿ ವಿಜ್ಞಾನಿಯಾಗಿ ದುಡಿದಿದ್ದೇನೆ. ನಾವು ಟ್ರಿಷಿಯಂ ಎಂದೇ ಬಳಸುವುದು. ಕೆಲವೊಮ್ಮೆ ಟ್ರೀಷಿಯಂ ಎಂದೂ ಬಳಕೆಯಾಗುತ್ತದೆ.
ನಿನ್ನೆಯ ಪ್ರಜಾವಾಣಿಯಲ್ಲಿ ಮತ್ತೆ ಭಾರಜಲ ಎಂದೇ ಬಳಕೆಯಾಗಿದೆ.
-ಪವನಜ
vimarshaki avare,
chennAgi tappugaLannu etti tOrisiddeera. patrikegaLalli bareyuvavaru iMtahaddanna Odi, ecchettokoLLali.
yAvAgalAdarU ondu grahaNavO, grahkUTavO, athavA innEnAdarU AkAshadalli naDeyO ghaTane irOvAgalU, namma patrikegaLu sikkApaTTe tappAgi bareetAre
I hinde nAnu thatskannada.com nalli banda intaha kelavu barahagaLa bagge TippaNisidde kUDa.
kannada “vaignyanika ” padagala bagegina agnyanada mele belaku chellidakke koti koti dhanyavaadagalu.
innadaru namma patrakartaru echcharagollali……….
ತುಂಬ ಸಮಯೋಚಿತ ಎಚ್ಚರಿಕೆ. ನಮ್ಮ ಪತ್ರಕರ್ತರು ಇನ್ನಾದರೂ ಎಚ್ಚರವಾಗಲಿ.
ಅಂತರಜಾಲಕ್ಕೆ ೪೦ ವರ್ಷ ಎಂಬ ಈ ಲೇಖನದಲ್ಲಿ ಅಡ್ಡಗೆರೆಗಳ ಹಾವಳಿ. ಗಣಕ ಯುಗದ ಬಗ್ಗೆ ಲೇಖನ ಬರೆಯುವಾಗ ನಿಗಾ ವಹಿಸದಿದ್ದರೆ ಗಣಕವೇ ಹೇಗೆ ಪತ್ರಿಕೆಯ ಅಂದವನ್ನು, ವ್ಯಾಕರಣವನ್ನು ಕೆಡಿಸುತ್ತದೆ ಎಂಬುದಕ್ಕೆ ಇದೊಂದು (ಪ್ರಜಾವಾಣಿ ವಾಣಿಜ್ಯ ಪುರವಣಿ, ೨೦೦೯ ನವೆಂಬರ್ ೧೮) ತಾಜಾ ಉದಾಹರಣೆ. (More …)
25.11.2009 ರ Deccan Herald ನ Website ನಲ್ಲಿ ಇನ್ನೂ ಗಮ್ಮತ್ತಿದೆ ನೋಡಿ… ಕೆಳಗೆ ಪೋಸ್ಟ್ ಗಳ ಲಿಂಕ್ ಕೊಟ್ಟಿದ್ದೇನೆ.. ![]()
http://www.deccanherald.com/content/37783/held-rape.html
http://www.deccanherald.com/content/37781/govt-subsidy-purchase-4-stroke.html
ವಿಮರ್ಶಕಿ, “ಅಡ್ಡಗೆರೆಯ ಅಡ್ಡಪರಿಣಾಮ” ಎನ್ನುವುದರ ಬದಲು ಇದಕ್ಕೆ “ಹೈಫನ್ ಹೈ ಫನ್!” (hyphen high fun) ಎಂದು ಹೆಸರುಕೊಡಬಹುದಿತ್ತು
ಆದರೆ ಆಗ ನೀನೂ (ನೀವೂ ಅಂತ ’ಬಹು’ವಚನ ಉಪಯೋಗಿಸ್ಬೇಕಾ, ನೀನೂ ಅಂತ ’ಸಾಸ್’ವಚನ ಸಾಕಾ?) ಲವಲvk, ಹೊಸದಿಗಂತ, ಸಂ.ಕ ಗಳನ್ನು ಅನುಕರಿಸಿದಂತಾಗ್ತಿತ್ತು!
ಅಂದಹಾಗೆ ಅತ್ಯಂತ ಮಜಾ ಕೊಟ್ಟ ಅಡ್ಡಗೆರೆ ಎಂದರೆ “ಯುವಜ- ನರಿಗಂತೂ ಇಂಟರ್ನೆಟ್ ಇಲ್ಲದಿದ್ದರೆ ಬದುಕೇ ಶೂನ್ಯ…”
‘ಪ್ರಜಾವಾಣಿ’ಯಲ್ಲಿ ಹೀಗೇಕಾಯಿತೊ?
ಭೂತ ಭಗವದ್ಗೀತೆ ಹೇಳಿದಂತೆ ಅನ್ನೋ ಗಾದೆ ಮಾತಿಗೆ ತಕ್ಕಂತೆ ಹೊಸದಿಗಂತದಲ್ಲಿ ಇಂದು ಬಂದ ಸಂಪಾದಕೀಯವನ್ನು ನೋಡಿ: ಕನ್ನಡದ ದುಸ್ಥಿತಿಗೆ ಯಾರೆಲ್ಲ ಹೊಣೆ ಎಂಬ ಸಂಪಾದಕೀಯವೇ ಬಂದಿದೆ! (More …)
‘ವಿಜಯ ಕರ್ನಾಟಕ’ ಮಾತ್ರ ಯೂನಿಯನ್ ಜಾಕ್ ಝಂಡಾ ಹಾರಿಸುತ್ತಿದೆ ಎಂದು ತಿಳಿದ ನನಗೆ, ‘ಹೊಸ ದಿಗಂತ’ದ ಕಂಗ್ಲಿಶ್ ರೂಪ ಕಂಡು ಆಘಾತವಾಯಿತು. “ಇಂಗ್ಲಿಷ್ನ ಬಗ್ಗೆ ಅತೀವ ವ್ಯಾಮೋಹ ಬೆಳೆಸಿಕೊಂಡಿರುವ ಆಡಳಿತ ವರ್ಗ”ವನ್ನು ದೂರುವ ಈ ಪತ್ರಿಕೆಯ ಸಂಕರ ತಳಿಯ ಭಾಷೆಗಿಂತ ಹೆಚ್ಚು ನೋವನ್ನುಂಟು ಮಾಡುತ್ತಿರುವದು ಈ ಪತ್ರಿಕೆಯ ಗೊಂದಲಮಯವಾದ ಸಂಪಾದಕೀಯ. ಶಾಸ್ತ್ರೀಯ ಭಾಷೆಯ ಸೌಲಭ್ಯಗಳು ಕನ್ನಡಕ್ಕೆ ದೊರೆಯಬೇಕಾದರೆ ಎಂತಹ ರಾಜಕೀಯ ಅಥವಾ ಸಾಂಸ್ಕೃತಿಕ ಕಾರ್ಯಸೂಚಿ ಬೇಕೆನ್ನುವದನ್ನು ಸಂಪಾದಕರು ಸೂಚಿಸಿಲ್ಲ. ಬದಲಾಗಿ ಕನ್ನಡ ಜನತೆಯ ಮೇಲೆ ಹಾಗು ಸರಕಾರಿ ಅಧಿಕಾರಿಗಳ ಮೇಲೆ ವ್ಯರ್ಥಾರೋಪ ಮಾಡುತ್ತಿದ್ದಾರೆ. ಇರಲಿ, ಈ ಪತ್ರಿಕೆಗಳು ತಮ್ಮನ್ನು ಕನ್ನಡ ಭಾಷಾ ಪತ್ರಿಕೆಗಳು ಎಂದು ಕರೆದುಕೊಳ್ಳುವ ಬದಲು ‘ಕನ್ನಡ ಬೆರೆಸಿದ ಇಂಗ್ಲಿಶ್ ಭಾಷೆ’ಯ ಪತ್ರಿಕೆಗಳು ಎಂದು ಕರೆದುಕೊಳ್ಳುವ ದಿನ ದೂರವಿಲ್ಲ!
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ವಿನ್ಯಾಸದ ಹೆಸರಿನಲ್ಲಿ ಲವಲವಿಕೆಯು ಕನ್ನಡವನ್ನು ಕತ್ತರಿಸುವ, ಒಂದೇ ಹಂತದಲ್ಲಿ ಕೊಲೆಗೈಯುವ ವಿಜಯ ಕರ್ನಾಟಕದ ಹೊಸ ಪ್ರಯತ್ನ. ಅದೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ ಆರಂಭವಾಗಿರುವುದು ‘ತನ್ನಿಮಿತ್ತ’ವೇ ಇರಬಹುದು. (More …)
vimarshaki nimma takararu kanglish bagge matrana, kannadadalli balakeyaguva samskruta mishranada bagge enu heltiri? samskruta padagalenu janasamanyar aadubhasheya baghavaagilla allave?
Vimarshaki : I am worried about losing the present Kannada format, rather than fighting on Kannada – Sanskrit issue. This issue is very vast and I am not prepared to dwell in detail. Thanks for the right comment. I can say just this: The mixing of Sanskrit came in centuries of usage. But mixing of English words is the crime being committed by the so called Kannada newspapers….. right?
ಕನ್ನಡವನ್ನಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೇ ಕೊಲೆ ಮಾಡುತ್ತಿದೆ ವಿಜಯ ಕರ್ನಾಟಕ. ಮೂರನೆಯ ದರ್ಜೆಯ ಸಿನೆಮಾದಲ್ಲಿರುವ
ಮಸಾಲಾ ಎಲ್ಲ ಈ ಪತ್ರಿಕೆಯಲ್ಲಿದೆ!
Chenngi hELidiri, vimarshaki. VK tanage iruv hoNeyannu aritukoLLabEku. GN Mohan anta hogaLubhattarannu AsthAnadalli jEtakke ittukonDa mEle Bhattarige inta tEke BekAgilla endu tOruttade.
ok friends.. tell me one thing, how the VK becomes number 1…?
ಕನ್ನಡವನ್ನು ಕಾಪಾಡಬೇಕಾದ ಪತ್ರಿಕೆಗಳು ಕನ್ನಡವನ್ನು ನಿರ್ಲಕ್ಷಿಸುವ ಪ್ರಸಂಗಗಳು ಹೆಚ್ಚಾಗುತ್ತಿವೆ. ವಿಜಯ ಕರ್ನಾಟಕದ ಲವಲವಿಕೆ ಕಲಬೆರಕೆ ಆಗಿದ್ದು ಹಾಗಿರಲಿ; ರಾಷ್ಟ್ರೀಯತೆ, ಸಂಸ್ಕೃತಿಗಳ ಬಗ್ಗೆ ಬಹಳ ಮಾತಾಡುವ ಪತ್ರಿಕೆಯಾದ ಹೊಸದಿಗಂತದ ದುರವಸ್ಥೆ ನೋಡಿ: ಎಲ್ಲವೂ ಇಂಗ್ಲಿಷ್ಮಯ! (More …)
ಅಯ್ಯೋ ವಿಮರ್ಶಕಿ,
ಈ ತರಹ ಕನ್ನಡದಲ್ಲಿ ಬೇರೆ ಮಾತುಗಳನ್ನ ಸಿಕ್ಕಾಪಟ್ಟೆ ಬಳಸ್ಬಾರ್ದು ಅಂತ ನಾವೊಂದ್ನಾಕು ಜನ ಸುಮ್ನೆ ಬಾಯಿ ಬಡ್ಕೋಬೇಕು ಅಷ್ಟೇ – ಏನೂ ಉಪಯೋಗ ಆಗೋಹಾಗೆ ಕಾಣೋಲ್ಲ. ಟೀವಿಯಲ್ಲಿ ಬರೋ ಜಾಹೀರಾತುಗಳಲ್ಲಿ ಬರೋ ಹಿಂದಿ-ಇಂಗ್ಲಿಷ್-ತಮಿಳು ವ್ಯಾಕರಣವನ್ನ ನೋಡೀ ನೋಡೀ ಸತ್ತು ಸುಣ್ಣವಾಗಿದೀನಿ ನಾನಂತೂ!
ಡೊಂಬರವನು ಕುಣಿಯುವದನ್ನು ನೋಡಿ, ಮಂಗ ತಾನೂ ಕುಣಿಯಿತಂತೆ. ‘ವಿಜಯ ಕರ್ನಾಟಕ’ದ ಕುರುಡು ಅನುಕರಣೆ ಮಾಡುತ್ತಿರುವ ‘ಸಂಯುಕ್ತ ಕರ್ನಾಟಕ’ವೂ ಸಹ ಆಂಗ್ಲ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದೆ. ಈ ಬಗೆಗೆ http://sallaap.blogspot.com/2009/10/blog-post_14.html ನೋಡಿರಿ.
ವಿಮರ್ಶಕಿಯ ಟಿಪ್ಪಣಿ:
ಸುನಾಥರವರು ವಿಮರ್ಶಕಿಗಿಂತ ಒಂದು ತಿಂಗಳು ಮುಂಚೆಯೇ ಸಂಯುಕ್ತ ಕರ್ನಾಟಕವನ್ನು ಹೀಗೆ ವಿಚಾರಿಸಿಕೊಂಡಿದ್ದು ನೋಡಿ ತುಂಬಾ ಸಮಾಧಾನವಾಗಿದೆ. ಆದರೆ ಕನ್ನಡ ಪತ್ರಿಕೆಗಳಿಗೆ ಕನ್ನಡವನ್ನೇ ಬಳಸಬೇಕೆಂಬ ಪ್ರಾಥಮಿಕ ಜ್ಞಾನದ ಅರಿವಾಗುವುದು ಯಾವಾಗಲೋ, ಅಂಥ ಸನ್ಮಂಗಲಕಾರಿ ಬುದ್ಧಿಯನ್ನು ಪತ್ರಿಕೆಗಳ ಸಂಪಾದಕರುಗಳಿಗೆ ದೇವರು ಕೂಡಲೇ ಕೊಡಲಿ ಎಂದು ಪ್ರಾರ್ಥಿಸೋಣ.
ಅಂತೂ ನಿರೀಕ್ಷಿಸಿದಂತೆಯೇ ಎಲ್ಲವೂ ನಡೆಯುತ್ತಿದೆ! ಜರ್ನಲಿಸಮ್ನ ಹೊಸ ಸಾಧ್ಯತೆಗಳು ಬಿಚ್ಚಿಕೊಳ್ಳುತ್ತಿವೆ. ಪತ್ರಿಕೆಯ ಸಂಪಾದಕರನ್ನು ವಾಚಾಮಗೋಚರ ಹೊಗಳುವ ಅಂಕಣ ಬರಹವೊಂದು ಅದೇ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ! ಓದುಗರಿಗೆ ಬೇಕಾದ್ದು ವಿನ್ಯಾಸವೆಂಬ ಬಹಿರಂಗ ಶುದ್ಧಿಯೋ, ಒಳ್ಳೆಯ ಜನಪರ ಕಂಟೆಂಟ್ ಎಂಬ ಅಂತರಂಗ ಶುದ್ಧಿಯೋ (ಸುದ್ದಿ ಎಂದೂ ಓದಿಕೊಳ್ಳಿ, ತಪ್ಪೇನಿಲ್ಲ) ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಪ್ರಸಂಗ ಬಂದಿದೆ. (More …)
‘bra’ ಪದವನ್ನು ಬೇರೊಂದು ಪದದ ಮಧ್ಯದಲ್ಲಿ ತುರುಕುವ ಸಲುವಾಗಿಯೇ ‘ದಿಗ್ಭ್ರಾಂತ’ ಪದವನ್ನು ‘ದಿಗ್ ಬ್ರಾಂತ‘ ಎಂದು ಬರೆದು ವಿಜಯ ಕರ್ನಾಟಕವು ಕನ್ನಡವನ್ನು ಕುಲಗೆಡಿಸುತ್ತಿದೆ. ಪುಟ ಪುಟಗಳಲ್ಲಿ ಪರಸ್ಪರರ ಬೆನ್ನು ಚಪ್ಪರಿಸುವಿಕೆ ನಡೆಯುತ್ತಿದೆ. ಆಧುನಿಕತೆ ಹಾಗು current trend ಎನ್ನುವ ನೆವದಲ್ಲಿ ಹೆಣ್ಣುಮಕ್ಕಳ ಅವಮಾನವಾಗುತ್ತಿದೆ. ಈ ಪತ್ರಿಕೆಗೆ ‘ಅಪದ್ಧ ಕರ್ನಾಟಕ’ ಎನ್ನುವದು ಸೂಕ್ತವಾದ ಹೆಸರಾದೀತೇನೊ?
ಪೂಜಾ ಗಾಂಧಿಯ ನಾಯಿಮರಿ ಸತ್ತಿದ್ದಕ್ಕೆ ಆk ಸಿಕ್ಕಾಪಟ್ಟೆ ಅತ್ತಳೆಂದೂ, ಅದಕ್ಕಾಗಿ ಶೂಟಿಂಗ್ ನಿಂತೇ ಹೋಯಿತೆಂದೂ vಜಯ ಕರ್ನಾಟಕದದ ಲವಲvkಯಲ್ಲಿ ಬಂದ e ‘ಐಟಮ್’ ಸುದ್ದಿಯನ್ನು ಗೀಚುvk ಎಂದು ಕರೆಯಬಹುದು.
ivattina G N Mohan column nOdida mEle ondu kAlam bariyOke kotta avakAsha vyaktiyannu mArAta Aguva mattakke hOguttadeyA anta vismayavAguttade. Mohan ee nelege baMdu muttabEkittA? idannu Odi visveshwar BattarU nAchike pattirabEku. che!
ಹೊಸ ವಿನ್ಯಾಸದ ವಿಜಯ ಕರ್ನಾಟಕದ ಬಗ್ಗೆ ಏನೂ ಕಾಮೆಂಟ್ ಇಲ್ಲವಲ್ಲ ಎಂದು ಹಲವು ಓದುಗರು ಚುಚ್ಚುತ್ತಿದ್ದಾರೆ. ಒಬ್ಬರಂತೂ ಈ ಹೊಸ ವಿನ್ಯಾಸವನ್ನು ವಾಚಾಮಗೋಚರ ಬೈದು ಉದ್ದ ಕಾಮೆಂಟ್ ರವಾನಿಸಿದ್ದಾರೆ. ತೀರಾ ವ್ಯಂಗ್ಯ ಮತ್ತು ಖಾಸಗಿ ಟೀಕೆ ಇದ್ದಿದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿಲ್ಲ. (More …)
ಕನ್ನಡ ಪತ್ರಿಕೆಗಳಲ್ಲಿ ಆಂಗ್ಲ ಪದಗಳ ಅವಶ್ಯಕತೆಯನ್ನು ಸಮರ್ಥಿಸಿಕೊಳ್ಳುವುದು ಅಸಾಧ್ಯ. ಲವಲvk ಎನ್ನುವುದು ಇನ್ನೂ ನೋಂದಣಿ ಹಂತದಲ್ಲಿ ಇದೆಯಾದ್ದರಿಂದ, ಅದನ್ನು ಕೈಬಿಡಲಿ ಎನ್ನುವುದೇ ನನ್ನ ಬೇಡಿಕೆ. ಇಲ್ಲವಾದರೆ ಲವಲವಿಕೆ ಎನ್ನುವ ಅಪ್ಪಟ ಕನ್ನಡ ಪದವನ್ನು ಬಳಸಲಿ.
ಡಿಯರ್ ವಿಮರ್ಶಕಿ..
ಶ್ರುತಿ ಬಗ್ಗೆ ಬರೆದದ್ದು ಓದಿ ನನಗು ಅನಿಸಿದ್ದು ನಿಮ್ಮದೇ ಅನಿಸಿಕೆ….
Neither Shruthi nor Chakravarthi said that they are departed. The basic principle of journalism is to publish an authentic story. How come Editorial staff let that stuff go for publication? Once upon a time Vishweshwar Bhat was teaching ethics of journalism in a journalism college. Shame Shame.
- Rangegowda Halanahalli
If the editorial staff is interested in Shruti’s life, let them. Why make readers bother on that stupid issue. Whether to keep mahendra or Chadra is HER problem. By making her personal affair public she lost her position in the BJP government and her image. Tabloids and tabloid like few dailies are responsible for her present misrable life. No sane reader is interested in Shruti’s personal life.
tumba cennagi brediddiri. olle bhvishya ide continue….
ಕಾಂಡೋಮ್ ಖರೀದಿ ಬಗ್ಗೆ ಸುಘೋಷ್ ನಿಗಳೆ ಬರೆದಿರೋದು ನೋಡಿದ್ರೆ, ಗಂಡಸ್ರಿಗೆ ನಿಜಕ್ಕೂ ದಮ್ ಇಲ್ಲವೇನೋ ಅನ್ನಿಸುತ್ತೆ. ಈ ಪುರುಷರಿಗೆ ಕಂಡಕಂಡಲ್ಲೆಲ್ಲ ಮೂತ್ರ ವಿಸರ್ಜನೆ ಮಾಡೋದಕ್ಕೆ ಬರುತ್ತೆ, ಆದ್ರೆ ಕಾಂಡೋಮ್ ಖರೀದಿ ಮಾಡ್ಬೇಕಾದ್ರೆ ಮಾತ್ರ ನಾಚಿಕೆ ಅಲ್ವರ?
ವಿಮರ್ಶಕಿಯವರಿಗೆ ನಮಸ್ಕಾರಗಳು.
ಸುಘೋಷ್ ನಿಗಳೆ ಬರೆದಿರುವ ಲೇಖನದಲ್ಲಿ ತಮಾಷೆಯ ಅಂಶ ಜಾಸ್ತಿ ಇದೆ, ನಿಮ್ಮ ಲೇಖನದಲ್ಲಿ ಮಾಹಿತಿ ಜಾಸ್ತಿ ಇದೆ. ಅಷ್ಟೇ ಹೊರತಾಗಿ ನಿಗಳೆಯವರನ್ನು ತೆಗಳಿ ಬರೆಯುವ ಅಗತ್ಯ ಇರಲಿಲ್ಲ. ನಿಮಗೆ ಅವರ ವಾದಗಳು ಇಷ್ಟವಾಗಿರದಿದ್ದರೆ ಹೆಸರನ್ನು ತಗೊಳ್ಳದೇ ಅದನ್ನು ಖಂಡಿಸಬಹುದಿತ್ತು. ನಿಗಳೆಯವರ ಲೇಖನದ ಬಗ್ಗೆ ಇಷ್ಟು ಖಾರದ ವಿಮರ್ಶೆ ಅಗತ್ಯವಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಹುಡುಕಲಿಕ್ಕೇ ಕೂತರೆ ನಿಮ್ಮ ಲೇಖನದಲ್ಲೂ ಇಂಥ ಪೂರ್ವಾಗ್ರಹಗಳನ್ನು ಹೆಕ್ಕಬಹುದು. ಆದರೆ ಒಳ್ಳೆಯ ಲೇಖನಗಳನ್ನು ನೀವಿಬ್ಬರೂ ಬರೆದಿರುವಾಗ ಅಂಥವನ್ನೆಲ್ಲ ಹುಡುಕಿ ನಿಮ್ಮ ಧೈರ್ಯಗುಂದಿಸುವುದು ಸರಿಯಲ್ಲ, ಅಲ್ಲವ್ರಾ ?
ಸುಪ್ತವರ್ಣ.
Vimarshaki writes: Actually, he has made a negative comment on condoms, that they are not like peppermints! (which I have corrected with you tube links). The fact is that they are really like peppermints, for men who take fun. It is their poppins for the day!! That is why I was forced to write such severe comments……. Otherwise, he is as free as myself and you, (both happen to be anonymous) to write any number of articles on condoms. But I strongly feel that the blog should have educated thereader, as I always feel a blog reader should get some information on something that matters in d ay to day life.
ಮಾನ್ಯ ವಿಮರ್ಶಕಿ,
ಈ ಲೇಖನಕ್ಕೆ ನನ್ನ ಹೆಸರಿನಲ್ಲಿ ಕಮ್ಮೆಂಟ್ ಪ್ರಕಟವಾಗಿರುವುದು ನನಗೆ ನಿಜಕ್ಕೂ ಅಚ್ಚರಿಯಾಗಿದೆ. ನನಗೆ ಗೊತ್ತಿಲ್ಲದಂತೆ ನನ್ನ ಹೆಸರಿನಲ್ಲಿ ಕಮ್ಮೆಂಟ್ ಸೃಷ್ಟಿಯಾಗುತ್ತಿದೆಯಾ?! ಹೇ ಭಗವಂತಾ ನೀನೇ ಕಾಪಾಡು ತಂದೆ…!
ವಿನಾಯಕ ಕೆ.ಎಸ್
Vimarshaki writes: I hope there are thousands of people in the name of Vinayaka in the whole world. More over, the earlier comment had its email ID as pa……2000@gmail.com, now you have pa……2000@gmail.com!! Even those IDs may be fake, who knows? I have deleted all the IDs now, as names matter and the comment. I cant stop publishing a comment written by somebody in the name of Vinayaka. Please understand it. Even our great Manikanth tried to do the same, but since he had written me an official email, I was saved.
ಪ್ರಿಯ ಓದುಗರು…..ನಿಮಗೂ ‘ಇಂಥ’ ಓದುಗರಿದ್ದಾರೆಯೇ ?
Vimarshaki writes: Really, I have many lovable / admiring readers!!!
vimarshaki writes: I will publish this comment from you only if it is mailed to me vimarshaki[at]gmail.com ok?
ನ್ಯೂಸಿಯಂ ಅನ್ನೋ ವಿಶ್ವಸ್ತರದ ಜಾಲತಾಣದಲ್ಲಿ ಇಂಡಿಯಾ ದೇಶದಿಂದ ಕೇವಲ ಎಂಟು ಪತ್ರಿಕೆಗಳ ಮುಖಪುಟಗಳು ಮಾತ್ರ ಪ್ರಕಟವಾಗ್ತಾ ಇವೆ. ಅದರಲ್ಲಿ ಕನ್ನಡಪ್ರಭ ನಂ. ೧ ಸ್ಥಾನದಲ್ಲಿ ಮಿಂಚುತ್ತೆ! ಶಭಾಷ್.. (More …)
UDAYAVANI avalible @ http://www.pressdisplay.org please cehk it..
vimarshaki wries; anna, it is http://www.pressdisplay.com, NOT ‘ORG’ ok? It is a good website. Thanks for the information.
ನ್ಯೂಸ್ಗೆ ಸಂಬಂಧಪಟ್ಟಂತೆ ಮ್ಯೂಸಿಯಂ, ಆದ್ದರಿಂದ ‘ನ್ಯೂಸಿಯಂ’. ಮತ್ತೆ “ಪೆನ್ಸಿಲ್ವೇನಿಯಾ ಬೀದಿಯಲ್ಲಿಯೋ ಸುವಿಖ್ಯಾತ ಕಚೇರಿ. ದಿನವೂ ಸಾವಿರಾರು ಜನ ಕಚೇರಿಗೆ ಭೇಟಿ ಕೊಡ್ತಾರೆ” ಅಂತ ಬರ್ದಿದ್ದೀಯಲ್ಲಮ್ಮ ಮ್ಯೂಸಿಯಂ ಅಂದರೆ ಕಚೇರಿನಾ? ಮ್ಯೂಸಿಯಂ ಅಂದರೆ ಕಚೇರಿ ಅಲ್ಲ, ಸಂಗ್ರಹಾಲಯ. ಇಲ್ಲಿ(ವಾಷಿಂಗ್ಟನ್ ಡಿಸಿಯಲ್ಲಿ)ರುವ ನ್ಯೂಸ್ ಮ್ಯೂಸಿಯಂ ಸಹ ಒಂದು ಬೃಹತ್ತಾದ, ಭವ್ಯವಾದ ಸಂಗ್ರಹಾಲಯ. ’ವಾರ್ತೆ’ಗೆ ಸಂಬಂಧಿಸಿದಂತೆ ಏನನ್ನೆಲ್ಲ ಸಂಗ್ರಹಿಸಿ ಪ್ರದರ್ಶಿಸಬಹುದೋ ಅದನ್ನೆಲ್ಲ ಅಲ್ಲಿ ಅಚ್ಚುಕಟ್ಟಾಗಿ ಮಾಡಿಟ್ಟಿದ್ದಾರೆ. “Be a TV reporter yourself” ಅಂತ ಒಂದು ವಿಭಾಗವಿದೆ, ಅಲ್ಲಿ ಕೆಲವು ಸಿದ್ಧ ಬ್ಯಾಕ್ಡ್ರಾಪ್ಗಳೆದುರು (White house, Capital, Football stadium ಇತ್ಯಾದಿ) ಮೈಕ್ರೋಫೋನ್ ಹಿಡಿದು ನಾವೇ ರಿಪೋರ್ಟ್ ಮಾಡುತ್ತಿರುವಂತೆ ಚಿತ್ರೀಕರಿಸಿ ನಮಗೆ ತೋರಿಸುತ್ತಾರೆ. ನಾನು ಹೋಗಿದ್ದಾಗ ಕನ್ನಡದಲ್ಲಿ ವರದಿಮಾಡಿ “ನ್ಯೂಸಿಯಂ ವಾಹಿನಿಗಾಗಿ ಶ್ವೇತಭವನದ ಮುಂದಿನ ಹುಲ್ಲುಹಾಸಿನ ಮೇಲಿಂದ ಶ್ರೀವತ್ಸಜೋಶಿ…” ಎಂದು ಬೈಟ್ ಎಂಡ್ ಮಾಡಿದ್ದೆ ![]()
Vimarshaki writes: I wrote in the context that it is not just a website, but has a well established office. It is also a museum, I agree, ok? You have seen it, so u say it is big, I have not seen it, so I say it is an office. Your value addition to my story is most welcome!!
ಇದನ್ನ ತಮಾಶೆ ಅನ್ಬೇಕೋ, ಅಣಕ ಅನ್ನಬೇಕೋ ಗೊತ್ತಾಗ್ತಾ ಇಲ್ಲ. (More …)
ನೆರೆ ಬಂದ ಕಾಲಕ್ಕೆ ಪತ್ರಕರ್ತರು ಏನೆಲ್ಲ ಒಳ್ಳೆ ಕೆಲಸಗಳನ್ನು ಮಾಡಬಹುದು ಎಂದು ವಿಮರ್ಶಕಿ ಅಲವತ್ತುಕೊಳ್ಳುತ್ತಿದ್ದಾಗಲೇ, ಮನಸ್ಸನ್ನು ಮತ್ತಷ್ಟು ಕಲ್ಲವಿಲಗೊಳಿಸಿದ ಲೇಖನ ಇಂದಿನ (೨೦೦೯ ಅಕ್ಟೋಬರ್ ೨೫)ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಬಂದಿದೆ. (More …)
“ಸಂತೆಗೆ ಊರು ಮೊಳ ನೇಯ್ದಂತೆ, “??
- ’ಯಾವುದಾದರೂ ಗಾದೆಯನ್ನು ಇಲ್ಲಿ ತುರುಕಿಸೋಣ, ಆ ಮೂಲಕ ಬರಹದ ತೂಕ ಸ್ವಲ್ಪ ಹೆಚ್ಚಿಸೋಣ’ ಎಂದು ಅನಿಸಿದಾಗ ವಿಮರ್ಶಕಿ ಸಹ ಬಹುಶಃ “ಸಂತೆಹೊತ್ತಿಗೆ ಮೂರು ಮೊಳ ನೇಯ್ದಂತೆ” ನೆನಪಿಗೆ ಬಂದ ಗಾದೆಯನ್ನು ಅದರ ಸರಿಯಾದ ರೂಪವೇನು ಎಂದು ತಲೆಕೆಡಿಸಿಕೊಳ್ಳದೆ ಬಳಸುತ್ತಾಳೆ ![]()
Vimarshaki writes: ಅಣೋ, ಸುಮ್ಸುಮ್ಕೆ ಹಂಗೆಲ್ಲ ಬರೆಯಾಳಲ್ಲಾಕಿ ಕಣಣ, ಸಂತೆ ಅಂಬೋ ಮಾರ್ಕೆಟ್ಗೆ ಹಿಂಥಾ ಲೇಖ್ನಾ ಮೂರು ಮೊಳ ನೇಯ್ದಂಗೇ ಐತೆ ಅಂತ ತಿಳ್ಕಂಡು ಹಂಗೆ ಬರ್ದೆ…… ಅದು ಅರ್ಥ ಬೇರೆ ಕಾಣ್ಸಿದ್ರೆ ನಾನೇನಾರಾ ಮಾಡ್ಲಿ ಕಣಣ. ಏನೋ ತೆಪ್ಪಾಗಿಬಿಡ್ತು, ಹೊಟ್ಯಾಗ ಹಾಕ್ಕೋಳೊಲ್ಯಾಕ……
ಕನ್ನಡ ಪತ್ರಕರ್ತರ ವೇದಿಕೆಯಾದ ಕನ್ನಡಜರ್ನಲಿಸ್ಟ್ಸ್ ಡಾಟ್ ನಿಂಗ್ ಡಾಟ್ಕಾಮ್ನಲ್ಲಿ ವಿಮರ್ಶಕಿಯ ಲೇಖನಕ್ಕೆ ಏನಾದರೂ ಪ್ರತಿಕ್ರಿಯೆ ಇದೆಯೇ ಎಂದು ನೋಡುತ್ತಿದ್ದಾಗ ಈ ಬ್ಲಾಗ್ ಕಣ್ಣಿಗೆ ಬಿತ್ತು. ನೋಡಿ, ಪತ್ರಕರ್ತರ ವೇದಿಕೆಯಲ್ಲಿ, ವೇದಿಕೆಯ ಸದಸ್ಯನೊಬ್ಬರು ಎನ್ ಜಿ ಓ ಒಂದನ್ನು ನಡೆಸುತ್ತಿರುವ ತನ್ನ ಮಿತ್ರನನ್ನು ಸ್ಥಳೀಯ (ಕೊಪ್ಪಳ) ಪತ್ರಕರ್ತನೊಬ್ಬ ಗೋಳು ಹುಯ್ದುಕೊಳ್ಳುವ ಬಗ್ಗೆ ದೂರು ಬರೆದಿದ್ದಾರೆ; ಅದೂ ಸಂಪಾದಕರಿಗೆ ಮಾಹಿತಿ ನೀಡಿದ ಮೇಲೆ.
ವಿಮರ್ಶಕಿ ಅವರೇ…
ತಡವಾಗಿ ಪ್ರತಿಕ್ರೀಯಿಸುತ್ತಿರುವದಕ್ಕೆ ಕ್ಷಮೆ ಇರಲಿ.. ಕೊಪ್ಪಳದ ಆ ಪತ್ರಕರ್ತ ಮಹಾಶಯನ ಹೆಸರು ………(withheld)ಅಂತ..ಅವರಿ ಕೆಲಸ ಮಾಡುತ್ತಿರುವ ಪತ್ರಿಕೆಯ ಹೆಸರು ……..(withheld) ಮತ್ತು ಅವರು ಸತಾಯಿಸಿದ ಸಂಸ್ಥೆ ………………… (withheld)ಎಂದು..
vimarshaki writes: Shri Dhananjaya Anna has given me the name of the rollcall journalist. I will publish the details soon in this blog without fear or favour.
ಏನಕ್ಕ ಕಾಮೆಂಟ್ ಮಾಡಿದ್ರೆ ಅದನ್ನೇ ಹೆಡ್ ಲೈನ್ ಮಾಡ್ತಿಯ,ಯಾರ ಸುದ್ದೀನು ಬೇಡಾಂತ ಸುಮ್ನಿದ್ರೆ ಪ್ರತಿಕ್ರಿಯೆ ಸೊನ್ನೆ ಅಂತಿಯ??
vimarshaki writes: ಏ ತಮಾ, ಪದೇ ಪದೇ ನನ್ನ ಕಿಚಾಯಿಸ್ತಾ ಇದೀಯ….. ಇರ್ಲಿ ಬಿಡು…. ತಮ್ಮ ಅಂತ ಸುಮ್ಕೆ ಇವ್ನಿ…….. ಒಳ್ಳೇ ಕಾಮೆಂಟ್ ಬಂದೆ ಹಾಕಿಲ್ವ ನಾನು? ಅಬಬಬಬಬ, ಏನಂತ ಕಿರೀಕ್ ಮಾಡೋನು ನೀನು? ಒಳ್ಳೇ ವಿಷಯಕ್ಕೆ ಕಾಮೆಂಟ್ ಬರ್ಲಿ ಅಂದುಬುಟ್ಟಿದ್ದೇ ತೆಪ್ಪಾಗೋಯ್ತ? ಸುಮ್ಕಿರಲೇ ತಮ, ಕಾಮೆಂಟ್ ಮಾಡೋದು ಚಲೋದೇ; ಆದ್ರೆ ಸುಮ್ಕೆ ಏನಾರ ಬಾಣ ಬಿಡ್ತೀಯೋ……. ಚಲೋ ಇರಲ್ಲ ನೋಡು…..
ಸಮೀಪದ ಆರಕ್ಷಕ ಠಾಣೆಗೆ ಹೋಗಿ ದೂರು ದಾಖಲಿಸಬಹುದಲ್ವೇ..ಸಾಕ್ಶ್ಯಾಧಾರಗಳೊಡನೆ…?!
ಅಂತೂ ವಿಮರ್ಶಕಿಯು ಬರೆದ ಪತ್ರಕರ್ತರ ಆಸ್ತಿ ಪ್ರಕಟಣೆ ಕುರಿತ ಲೇಖನವು ನಿಂಗ್ ಎಂಬ ಸೋಶಿಯಲ್ ನೆಟ್ವರ್ಕ್ನ ಕನ್ನಡ ಜರ್ನಲಿಸ್ಟ್ಗಳ ವಿಭಾಗದಲ್ಲೂ ಜಾಗ ಪಡೆದಿದೆ.
sunaath 1:29 pm on December 19, 2009 Permalink |
ತಮ್ಮ ಪತ್ರಿಕೆಯನ್ನು ಬೈದು ಲೇಖನ ಬರೆದರೆ ಅದನ್ನು ಪ್ರಕಟಿಸುವ ಪ್ರಾಮಾಣಿಕತೆ ಯಾವ ಪತ್ರಿಕೆಗೂ ಇಲ್ಲ ಬಿಡಿ!
sahana 8:04 am on December 19, 2009 Permalink |
sorry for using this way to reach you…
please read below link. How it is ವಾಗ್ದಾಳಿ ? what is ವಾಗ್ದಾಳಿ mean ? Where he spoke ?
ದಿನಕರನ್ ವಿರುದ್ಧ ಶೈಲೇಂದ್ರ ವಾಗ್ದಾಳಿ
http://www.prajavani.net/Content/Dec192009/state20091218161569.asp?section=updatenews
sahana 6:49 am on December 19, 2009 Permalink |
Today VK mangalore edition published a photo with VK reporter lighting the lamp in a program. But, only VK published this and All other publications dropped the news item. So sad..
vimarshaki 9:43 am on December 21, 2009 Permalink |
Dear Athradi Suresha Hegde,
your comments on Shri Vishweshwar Bhat are a bit more personal. So, I have not published them. Let us wait and watch. Vimarshaki’s policy is to publish more a general, public interest comment, than a personal one. Thanks for your comments.